Sunday, June 13, 2010

ಮಲ್ಲಣ್ಣನ ಮಹಾ ಮಾನವೀಯತೆ!....

ನಮ್ಮ ಮಲ್ಲಣ್ಣ ಒಂತರಾ ವಿಚಿತ್ರ ಮನುಷ್ಯ. ಅವನಿಗೆ ಯಾವಾಗ ಏನೇನು ವಿಚಾರಗಳು ಹೊಳೆಯುತ್ತವೆಯೋ 
ಅವನಿಗೂ ಗೊತ್ತಿಲ್ಲ. ಸದಾ ಒಂದಲ್ಲ ಒಂದು ಪಜೀತಿಯಲ್ಲಿ ಸಿಕ್ಕಿಹಾಕಿಕೊಳ್ತಾ ಇರ್ತಾನೆ....

ಇಂತಿರಲೊಂದು ದಿನ  ಮೂರ್ಖ ಪೆಟ್ಟಿಗೆಯಲ್ಲಿ ಯಾವುದೋ ಕಣ್ಣೀರು ತುಂಬಿದ ದಾರವಾಹಿ ನೋಡಿ ನಗುತ್ತಾ 
ಕುಳಿತಿದ್ದ(?) ನಮ್ಮ ಮಲ್ಲರ ಮಲ್ಲ!
ಇದ್ದಕ್ಕಿದ್ದಂತೆ ಜಾಹಿರಾತು ಶುರು! ಎಷ್ಟಾದರೂ ದಾರಾವಾಹಿಗಳು ಜಾಹಿರಾತಿನ ಒಂದು ಭಾಗ ತಾನೇ? ಅದ್ಯಾವುದೋ
ಧ್ವಿಚಕ್ರ ವಾಹನದ ಪ್ರಚಾರ! ಟ್ರಾಫಿಕ್ ಸಿಗ್ನಲ್ ನಲ್ಲಿ ಒಂದು ಹುಡುಗ ಹುಡುಗಿ ನಳನಳಿಸುವ ಚಂದದ ದ್ವಿಚಕ್ರ ವಾಹನದಲ್ಲಿ
ಕುಳಿತಿದ್ದಾರೆ. ಅವರ ಪಕ್ಕದಲ್ಲಿದ್ದ ಕಾರಿನಿಂದ ನೀರು ಕುಡಿದು ಖಾಲಿ ಬಾಟಲಿ ಹೊರಗೆಸೆದು ಕಾರು ಮುಂದೆ ಹೋಗುತ್ತದೆ. 
ಖಾಲಿ ಬಾಟಲಿ ಎತ್ತಿಕೊಂಡು ಅವರಿಬ್ಬರೂ ಕಾರನ್ನು ಹಿಂಬಾಲಿಸುತ್ತಾರೆ. ಹೊಂಡ  ಗುಂಡಿ ಮೆಟ್ಟಿಲು ಚರಂಡಿ ಎಲ್ಲೆಲ್ಲೂ 
ಸಲೀಸಾಗಿ ಓಡುವ  ಬಂಡಿ! ಅಂತೂ ಕೊನೆಗೆ ಇನ್ನೊಂದು ಟ್ರಾಫಿಕ್ ಸಿಗ್ನಲ್ಲಿನಲ್ಲಿ ಕಾರು ನಿಂತಿರುತ್ತದೆ. ಆ ಹುಡುಗಿ ಖಾಲಿ
ಬಾಟಲಿಯನ್ನು ಅದೆ ಕಾರಿನೊಳಗೆ ಹಾಕಿ ಟಾಟ ಮಾಡಿ ಹೋಗುತ್ತಾರೆ!

ಇದಿಷ್ಟು ಆ ಜಾಹಿರಾತು! ಈ ಜಾಹಿರಾತಿನಿಂದ ಮಲ್ಲಣ್ಣ ಬಹಳ ಪ್ರೇರಿತನಾಗುತ್ತಾನೆ. ಏನಾದರೂ ಸಮಾಜ ಕಲ್ಯಾಣ
ಕಾರ್ಯ ಮಾಡಬೇಕೆಂಬ ಮಹದಾಸೆ ಮಲ್ಲಣ್ಣನ ಮನದಲ್ಲಿ ಮೂಡುತ್ತದೆ.

ಎಂದಿನಂತೆ ಮಲ್ಲಣ್ಣ ಆಫೀಸಿಗೆ ಬೈಕಿನಲ್ಲಿ ಹೋಗ್ತಾ ಇದ್ದ. ಸಿಗ್ನಲ್ಲಿನಲ್ಲಿ ನಿಂತಿದ್ದ ಅವನ ಪಕ್ಕ ಒಂದು ಕಾರು ಬಂದು ನಿಂತಿತು.
ಅದರಲ್ಲಿ ಮೂರ್ನಾಲ್ಕು ಹುಡುಗರು ಜೋರಾಗಿ ಮ್ಯುಸಿಕ್ ಹಾಕಿಕೊಂಡು ತಾವೂ ಹಾಡುತ್ತಾ ಕೇಕೆ ಹಾಕುತ್ತಿದ್ದರು. ಕುಡಿದ ನೀರಿನ
 ಖಾಲಿ ಬಾಟಲಿಯೊಂದನ್ನು ಹೊರಗೆಸೆದ ಹುಡುಗರು ಕಾರನ್ನು ರೊಯ್ಯನೆ ಮುಂದಕ್ಕೆ ಓಡಿಸಿದರು.

ಈ ದೃಶ್ಯವನ್ನು ಕಂಡ ನಮ್ಮ ಮಲ್ಲಣ್ಣನ ಮಾನವೀಯತೆ ಜಾಗೃತಗೊಳ್ಳುತ್ತದೆ. ಜಾಹಿರಾತು ಸ್ಮೃತಿ ಪಟಲದ ಮೇಲೆ ಮೂಡಿ
ಮರೆಯಾಗುತ್ತದೆ. ಬಾಟಲಿ ಎತ್ತಿಕೊಂಡು ಕಾರಿನ ಹಿಂದೆ ಓಡುವ ಮನಸ್ಸು ಮಾಡುತ್ತಾನೆ. ಆದರೆ ಆ ಬಾಟಲಿಯೇ ಬಿದ್ದ ಸ್ಥಳದಲ್ಲಿ
ಇರಲಿಲ್ಲ! ಎಲ್ಲಾ ವಾಹನಗಳ ಚಕ್ರದಡಿ ಸಿಕ್ಕಿ ರಸ್ತೆಯ ಯಾವ ಮೂಲೆ ಸೇರಿತ್ತೋ ಬಲ್ಲವರಾರು?

ಆ ಬಾಟಲಿ ಇಲ್ಲದಿದ್ದರೇನಂತೆ? ಖಾಲಿ ಬಾಟಲಿಗಳಿಗೆ ಬರವೇ......! ರಸ್ತೆಬದಿಯಲ್ಲಿ ಬಿದ್ದಿದ್ದ ಹಳೆ ಬಾಟಲಿಯನ್ನೇ ಎತ್ತಿಕೊಂಡು
ಹೊರಟ ಮಲ್ಲಣ್ಣ.

ಬೈಕ್ ವೇಗವಾಗಿ ಓಡಿಸುತ್ತಾ ಕಾರನ್ನು ಹಿಂಬಾಲಿಸಿದ. ಹೊಂಡ ಗುಂಡಿ ಮೆಟ್ಟಿಲುಗಳ ಮೇಲೆ ಬೈಕ್ ಓಡಿಸುವ ಸಾಹಸ ಮಾತ್ರ 
ಮಾಡಲಿಲ್ಲ!
ಅಂತೂ ಕೊನೆಗೆ ಆ ಕಾರನ್ನು ಹಿಡಿದೇ ಬಿಟ್ಟ. ನಿಂತ ಕಾರಿನ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಕಾರಿನ ಗಾಜು ತಟ್ಟಿದ ಥೇಟ್ ಜಾಹಿರಾತಿನ 
ಶೈಲಿಯಲ್ಲಿ! ಕಿಟಕಿ ಗಾಜು ಕೆಳಗಿಳಿಯುತ್ತಿದ್ದಂತೆ ಬಾಟಲಿಯನ್ನು ಕಾರೊಳಗೆ ಎಸೆದು ಟಾಟಾ ಮಾಡಿ  ಬೈಕ್ ಮುಂದಕ್ಕೆ ಓಡಿಸಿದ 
ಮಲ್ಲಣ್ಣ!

ಅಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ. ಪಜೀತಿ ಶುರು ಆಗಿದ್ದೇ ಆಗ!

ಕಾರಿನೊಳಗೆ ಇದ್ದ ಹುಡುಗರ ಪಿತ್ತ ನೆತ್ತಿಗೇರಿತು. ಜೊತೆಗೇ ಬೀರಿನ ಕುಮ್ಮಕ್ಕು ಇತ್ತೆನ್ನಿ! ಮಲ್ಲಣ್ಣನ ಬೈಕನ್ನು ಅಡ್ಡಗಟ್ಟಿ ನಿಲ್ಲಿಸಿದ
ಹುಡುಗರು ಕಾರಿನಿಂದ ಕೆಳಗಿಳಿದರು. ಬಲವಾದ ಹಸ್ತವೊಂದು ಮುಖಕ್ಕೆ ಅಪ್ಪಳಿಸಿದ್ದಷ್ಟೇ ಗೊತ್ತು. ಮುಂದೇ ಮಲ್ಲಣ್ಣ ಆಸ್ಪತ್ರೆಯ
ಹಾಸಿಗೆಯಲ್ಲೇ ಕಣ್ ತೆರೆದಿದ್ದು! ಆಸ್ಪತ್ರೆಯಿಂದ ಮೂರು ದಿನದ ನಂತರ ಮನೆಗೆ ಬಂದ ಮಲ್ಲಣ್ಣ ಮತ್ತೆ ಆ ಜಾಹಿರಾತನ್ನು ನೋಡಲೇ ಇಲ್ಲ! 

ಒಂದು ವಿಷಯ ಅವನಿಗೆ ಅರ್ಥವಾಗದೆ ಉಳಿದಿತ್ತು. ಅದೇನೆಂದರೆ ಜಾಹಿರಾತಿನಲ್ಲಿ ಈ ಭಾಗವನ್ನು ಯಾಕೆ ತೋರಿಸಲಿಲ್ಲ?
ನಿಮಗೇನಾದರೂ ಕಾರಣ ಗೊತ್ತಿದ್ದರೆ ಪಾಪ ನಮ್ಮ ಮಲ್ಲಣ್ಣನಿಗೆ ಸ್ವಲ್ಪ ತಿಳಿಸ್ತೀರಾ? ಬಾರೀ ತಲೆ ಕೆಡಿಸಿಕೊಂಡು ಯೋಚಿಸ್ತಿದ್ದಾನೆ!

67 comments:

  1. ಚನ್ನಾಗಿದೆ ನಿಮ್ಮ ಮಲ್ಲಣ್ಣನ ಪಜೀತಿಯ ಕತೆ
    ಜಾಹಿರತುಗಳು ಮುಗ್ದ ಮನಸ್ಸುಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಜಾಹಿರಾತುದಾರರಿಗೆ ಹೇಗೆ ಅರ್ಥವಾಗುತ್ತದೆ ಸಾರ್

    ಹೊನ್ನ ಹನಿ
    www.honnahani.blogspot.com

    ReplyDelete
  2. hmmm ಸ್ವಲ್ಪ ಜಾಸ್ತಿ ತೋರ್ಸಿದ್ರೆ ಅವ್ರು ಜಾಸ್ತಿ ಹಣ ಕಟ್ಟಬೇಕು...ಈ ವಿಷ್ಯ ಮಲ್ಲನ್ನನಿಗೆ ತಿಳಿಸಿ..ಚನ್ನಾಗಿದೆ ಪಾಪ ಮಲ್ಲಣ್ಣ

    ReplyDelete
  3. ಮಲ್ಲಣ್ಣನಿಗೆ ಈಗ ದುಡ್ಡು ಕೊಟ್ಟರೂ ಈ ಜಾಹೀರಾತು ಮಾಡಲಾರ!ಮುಂದೆ ಟಿ.ವಿ.ಯಲ್ಲಿ ತೋರಿಸದೇ ಇದ್ದ ಭಾಗ ನೆನಸಿಕೊಂಡು!ಹಾಸ್ಯ ಲೇಖನ ಚೆನ್ನಾಗಿದೆ.

    ReplyDelete
  4. ಜಾಹಿರಾತಿನಲ್ಲಿ ’ಆ’ ಭಾಗವನ್ನು ತೋರಿಸಿದ್ದರೆ ನೀವು ನಮ್ಮನ್ನು ಇಂತಹ ನವಿರು ಹಾಸ್ಯದೊಂದಿಗೆ ನಗಿಸಲಾಗುತ್ತಿರಲಿಲ್ಲ !.:) ಜಾಹಿರಾತೊಂದನ್ನು ಬಳಸಿ ಚೆನ್ನಾಗಿ ನಗಿಸಿದಿರಿ.

    ನಿಮ್ಮ blog Text color change ಮಾಡಾಬಹುದ ??

    ReplyDelete
  5. praveen,
    hha hhhaaa... sakkattaagide mallannana kathe..... jaahiraatu yaavaagaloo ardhamardha taane torisodu............ mallaNNana pajeeti nenasikondre

    ReplyDelete
  6. ನನ್ನ ಮನದ ಭಾವಕೆ...................
    ಮಲ್ಲಣ್ಣನಿಗೆ ಖಂಡಿತಾ ಹೇಳ್ತೀನಿ.
    ಧನ್ಯವಾದಗಳು.

    ReplyDelete
  7. ಹರೀಶ್,
    ಜಾಹಿರಾತುದಾರರಿಗೆ ಹಣವೊಂದೇ ಮುಖ್ಯವಲ್ಲವೆ? ಯಾರ ಮನಸ್ಸಿನ ಮೇಲೋ ಆಗುವ ಪರಿಣಾಮ ಇವರಿಗೆಲ್ಲಿ ತಟ್ಟುತ್ತದೆ?
    ಪ್ರತಿಕ್ರಿಯೆಗೆ ಧನ್ಯವಾದಗಳು........

    ReplyDelete
  8. ಡಾ. ಕೃಷ್ಣಮೂರ್ತಿ ಸರ್,
    ಜಾಹಿರಾತು ಮಾಡುವುದಿರಲಿ, ನೋಡುವ ಸಾಹಸವನ್ನೂ ಮಾಡಲಾರ!
    ಧನ್ಯವಾದಗಳು ಸರ್........

    ReplyDelete
  9. ಸುಬ್ರಮಣ್ಯ ಸರ್,
    ದನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ........
    blog text color change ಮಾಡಿದ್ದೇನೆ. ಈಗ ಸರಿಯಾಗಿದೆಯಾ?
    Thanks for your suggestion...

    ReplyDelete
  10. ದಿನಕರ್ ಸರ್,
    ಜಾಹಿರಾತು ಅರ್ಧಂಬರ್ದ ಅಂತ ಮಲ್ಲಣ್ಣನಿಗೆ ಗೊತ್ತಾಗಿದ್ದೆ ಈಗ!
    ಬಂದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  11. ವಿಜಯಶ್ರೀ ಮೇಡಂ,
    ಮಲ್ಲಣ್ಣನ ಪಜೀತಿಗೆ ಪಾಪ ಅನ್ನದೆ ಬೇರೆ ವಿದಿಯಿಲ್ಲ!
    ಧನ್ಯವಾದಗಳು.........

    ReplyDelete
  12. ಸುಮಾ ಮೇಡಂ,
    ಧನ್ಯವಾದಗಳು.

    ReplyDelete
  13. ಮಲ್ಲಣ್ಣ ಮಂಗ್ಯ ಆದ ಅನ್ನಿ,, ಚೆನ್ನಾಗಿದೆ ಹಾಸ್ಯ ಲೇಖನ

    ReplyDelete
  14. ಹೋ ಹೋ ಹೋ! ಮಲ್ಲಣ್ಣ ಟೀವಿ ನೋಡೋದೇ ಬಿಟ್ಟಿರಬೇಕು?

    ReplyDelete
  15. Tumba channagide article...Ella ok ee mallanna yaake ... idu real storyna or fictitious???

    ReplyDelete
  16. haa haa haaa, superb means superb....

    ReplyDelete
  17. ha, haa, haa, superb means superb.

    ReplyDelete
  18. ಸುನಾಥ್ ಸರ್,
    ಟೀವಿ ನೋಡಿದರೂ ಜಾಹಿರಾತು ನೋಡುವುದೇ ಇಲ್ಲ!
    ಧನ್ಯವಾದಗಳು ಪ್ರತಿಕ್ರಿಯೆಗೆ........

    ReplyDelete
  19. ಶೆಟ್ಟರೆ,
    ತುಂಬಾ ಧನ್ಯವಾದಗಳು.......

    ReplyDelete
  20. available ಪ್ರವೀಣ್ ಆರ್ ಗೌಡ:
    ವಿನಾಯಕ್ ಹೆಗ್ಡೆ,
    ಇದು ಜಾಹಿರಾತು ಪ್ರಚೋದಿತ ಕಾಲ್ಪನಿಕ ಬರಹ............
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.......

    ReplyDelete
  21. ಸಾಗರಿ..............
    ನನ್ನ ಬ್ಲಾಗಿಗೆ ಸ್ವಾಗತ.........
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.......

    ReplyDelete
  22. ಸಾಗರಿ..............
    ನನ್ನ ಬ್ಲಾಗಿಗೆ ಸ್ವಾಗತ.........
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.......

    ReplyDelete
  23. ಪ್ರವೀಣ್..

    ಜಾಹಿರಾತುಗಳ ಹಾವಳಿ ಬಗೆಗೆ ಬೇಸರವಾಯಿತು..
    ಪೆಟ್ಟು ತಿಂದರೂ.. ಮುಗ್ಧ ಮಲ್ಲಣ್ಣ ಇಷ್ಟವಾಗುತ್ತಾನೆ..

    ಚಂದದ ಬರಹಕ್ಕೆ ಅಭಿನಂದನೆಗಳು...

    ReplyDelete
  24. ಪ್ರವೀಣ್, ಜಾಹೀರಾತಿನ ಹಿಂದು ಮುಂದು ತಿಳಿಯದೇ ಏನೂ ಮಾಡಬಾರದು ಎನ್ನುವ ಗೋಲ್ಡನ್ ರೂಲ್ ಮಲ್ಲಣ್ಣನಿಗೆ ತಿಳಿದಿರಲಿಲ್ಲ ಅನ್ಸುತ್ತೆ...ಈಗ ತಿಳಿತಲ್ಲಾ..ಹಹಹ ಒಳ್ಳೇ ಮಲ್ಲಣ್ಣ...!!!

    ReplyDelete
  25. chennaagide Praveen, idannella jaheeraatu tayaarakaru gamanisabeku allave? mugdha vyaktige aada shikshe nodi paapaa annisitu.

    ReplyDelete
  26. ಹ್ಹ ಹ್ಹ ಹ್ಹಾ........
    ಯಾರಪ್ಪ ಈ ಮಲ್ಲಣ್ಣ.........
    ಪಾಪ ಮಲ್ಲಣ್ಣನ ಪಜೀತಿಗೆ ಅಳಬೇಕೋ ನಗಬೇಕೋ ಗೊತ್ತಾಗ್ತಾ ಇಲ್ಲ!

    ReplyDelete
  27. ಹಾಸ್ಯ ಲೇಖನ ಚೆನ್ನಾಗಿದೆ. ಮಲ್ಲಣ್ಣನ ಮುಗ್ಧತೆ ಇಷ್ಟವಾಯಿತು ಜೊತೆಗೆ ಅವನ ಪಜೀತಿ ನಗಿಸಿದರೂ ಯಾಕೋ ಬೇಜಾರೂ ಆಯಿತು.

    ReplyDelete
  28. ಪ್ರಕಾಶಣ್ಣ.........
    ಇಂದಿನ ಜಾಹಿರಾತುಗಳ ಗುನಮತ್ತವೆ ಹಾಗೆ..., ಅದರಿಂದಾಗುವ ಪರಿಣಾಮಗಳ ಮರಿವೆಯೇ ಇರುವುದಿಲ್ಲ.....
    ಪ್ರತಿಕ್ರಿಯೆಗೆ ಧನ್ಯವಾದಗಳು.....

    ReplyDelete
  29. ಅಜಾದ್ ಸರ್,
    ಆ ಗೋಲ್ಡನ್ ರೂಲ್ ಮಲ್ಲಣ್ಣನಿಗೆ ಗೊತ್ತಿದ್ದರೆ ಈ ಪಜೀತಿ ಎಲ್ಲಾಗುತ್ತಿತ್ತು?
    ಧನ್ಯವಾದಗಳು.......

    ReplyDelete
  30. Vanita Madam...
    Wel come to my blog.....
    Thank you for your comment..........

    ReplyDelete
  31. ವಿ ಆರ್ ಭಟ್ ಸರ್,
    ಜಾಹಿರಾತು ಮಾಡುವವರಿಗೆ ಕೇವಲ ಹಣ ಮಾತ್ರ ಮುಖ್ಯ. ಹೊಣೆಯಲ್ಲ. ಅದರಿಂದ ಯಾರಿಗೋ ತೊಂದರೆಯಾದರೆ ಅವರಿಗೇನು?
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.

    ReplyDelete
  32. ಅಂದಿನಿ.........
    ಅಳುವುದೂ ಬೇಡ, ನಗುವುದೂ ಬೇಡ. ಅದರ ಬಗ್ಗೆ ಯೋಚಿಸು ಅಷ್ಟೇ....
    ಧನ್ಯವಾದಗಳು......

    ReplyDelete
  33. ಸೀತಾರಾಮ್ ಸರ್,
    ಜಾಹಿರಾತಿನ ಹಾವಳಿ ದಿನ ದಿನ ಹೆಚ್ಚುತ್ತಿದೆ. ಜಾಹಿರಾತಿನ ಪರಿಣಾಮವೂ ಕೂಡಾ....
    ಎಷ್ಟೋ ಮುಗ್ದ ಮನಸ್ಸುಗಳ ಮೇಲೆ ತುಂಬಾ ಪರಿಣಾಮ ಬೀರುತ್ತಿವೆ.......
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ......

    ReplyDelete
  34. nija, nija jahiratugalu vichitravaagirtave, chennagide nimma baraha.

    ReplyDelete
  35. NRK,
    welcome to my blog.......
    thanks for your comment.........

    ReplyDelete
  36. ಪಾಪ ಮಲ್ಲಣ್ಣ ...ಹ್ಹಾ ಹ್ಹಾ ಹ್ಹಾ

    ReplyDelete
  37. ಶಶಿ ಅಕ್ಕ.....
    ಹೌದು ಕಣ್ರೀ, ಪಾಪ ಮಲ್ಲಣ್ಣ..........
    ಧನ್ಯವಾದಗಳು.........

    ReplyDelete
  38. ಹ್ಹಾ ಹ್ಹಾ ಹ್ಹಾ...
    ನವಿರು ಹಾಸ್ಯ ಸೂಪರ್....
    ಪಾಪ ಮುಗ್ಧ ಮಲ್ಲಣ್ಣ ......

    ReplyDelete
  39. ಸುಬ್ರಮಣ್ಯ ಮಾಚಿಕೊಪ್ಪ,
    ಧನ್ಯವಾದಗಳು.........

    ReplyDelete
  40. ಸವಿಗನಸು,
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ......
    ಆಗಾಗ ಬರ್ತಾ ಇರಿ.........

    ReplyDelete
  41. Vasant,
    Welcome to my blog
    and thanks for your comment...
    keep visiting.......

    ReplyDelete
  42. ಶಿವಪ್ರಕಾಶ್,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು......

    ReplyDelete
  43. ನಿಮ್ಮ ಮಲ್ಲಣ್ಣನ ಕತೆ ಕೇಳಿ ಅಯ್ಯೋ ಎನಿಸಿತು.

    ravi

    ReplyDelete
  44. ರವಿ ಹೆಗಡೆಯವರೇ.......
    ನನ್ನ ಬ್ಲಾಗಿಗೆ ಸ್ವಾಗತ.........
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
    ಹೀಗೆ ಆಗಾಗ ಬರ್ತಾ ಇರಿ.......

    ReplyDelete
  45. ಹ್ಹ ಹ್ಹ.. ಆದ್ರೂ ಪಾಪ ಮಲ್ಲಣ್ಣ :)

    ReplyDelete
  46. ಕಥೆ ಚೆನ್ನಾಗಿದೆ ಮಾರಾಯ್ರೇ... ಅದು ಮಲ್ಲಣ್ಣ ಖಾಲಿ ಹಳೆ ಬಾಟಲಿ ಬಿಸಾದಿದ್ದಕ್ಕೆ ಹುಡುಗರಿಗೆ ಕೋಪ ಬಂದಿರಬಹುದು..ಮುಂದೆ ತುಂಬಿದ ಬೀರ್ ಬಾಟಲಿ ಎಸೆಯಲು ಹೇಳಿ :)

    ReplyDelete
  47. :D :D ಪಾಪಾ.... ಮಲ್ಲಮ್ಮನ ಪವಾಡದ ಕಥೆಯಂತೇ ಮಲ್ಲಣ್ಣನ ಸಾಹಸ ಎಂದರೆ ಸರಿಯಾದೀತೇನೋ... :) ಅಂದಹಾಗೆ ಇದು ನಿಜವಾಗಿ ನಡೆದದ್ದೇ?

    ReplyDelete
  48. PaLa ಅವರೇ,
    ನನ್ನ ಬ್ಲಾಗಿಗೆ ಸ್ವಾಗತ.............
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  49. ರವಿಕಾಂತ್ ಗೋರೆಯವರೇ,
    ಸ್ವಾಗತ ನಿಮಗೆ.........
    ಇನ್ನೊಮ್ಮೆ ಬಾಟಲಿ ಎಸೆಯುವಾಗ ತುಂಬಿದ ಬೀರ್ ಬಾಟಲಿಯನ್ನೇ ಎಸೆಯುವಂತೆ ಮಲ್ಲನ್ನನಿಗೆ ಹೇಳುತ್ತೇನೆ........!
    ಪ್ರತಿಕ್ರಿಯೆಗೆ ಧನ್ಯವಾದಗಳು.
    ಆಗಾಗ ಬರ್ತಾ ಇರಿ.

    ReplyDelete
  50. ತೇಜಕ್ಕಾ........
    ಬಹಳ ದಿನಗಳ ನಂತರ ಇತ್ತ ಬಂದಿದ್ದಕ್ಕೆ ಧನ್ಯವಾದಗಳು.
    ಜಾಹಿರಾತನ್ನು ನೋಡಿ ನನ್ನ ಕಲ್ಪನೆಗೆ ಬಂದಿದ್ದನ್ನು ನಿಮ್ಮೆಲ್ಲರ ಮುಂದೇ ಬರವಣಿಗೆಯ ಮೂಲಕ ಒಪ್ಪಿಸಿದ್ದೇನೆ ಅಷ್ಟೇ!
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.
    ಆಗಾಗ ಬರುವುದನ್ನು ಮರೆಯಬೇಡಿ.

    ReplyDelete
  51. Hi Praveen..

    Mallannanna Pajeetige sikkisibittiralla :) hasya mishrita baraha chennagide.. next time mallannange husharagi iroke heli :)

    pravi

    ReplyDelete
  52. tumba chennagide sir mallannana story.
    ha ha ha
    Raaghu.

    ReplyDelete
  53. ಮನದಾಳದಿಂದ............ ,

    ತೇಜಸ್ವಿ ಅವರ ಕರ್ವಾಲೋ ಕಾದಂಬರಿಯಲ್ಲಿ ಈ ರೀತಿ ಮಂದಣ್ಣ ಇದಾನೆ..
    ಚೆನ್ನಾಗಿದೆ.

    ReplyDelete
  54. ಪ್ರವೀಣ್,
    ಧನ್ಯವಾದಗಳು ಪ್ರತಿಕ್ರಿಯೆಗೆ,

    ReplyDelete
  55. ರಘು,
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  56. ಜ್ಞಾನಾರ್ಪಣಮಸ್ತು,
    ಬ್ಲಾಗಿಗೆ ಸ್ವಾಗತ,
    ಪ್ರತಿಕ್ರಿಯೆಗೆ ಧನಯವಾದಗಳು. ಹೀಗೆ ಬರ್ತಾ ಇರಿ.

    ReplyDelete
  57. ಪ್ರವೀಣ್ ಸರ್....
    ತಡವಾಗಿ ಪ್ರತಿಕ್ರಿಯಿಸುತಿದ್ದೇನೆ. ಕ್ಷಮೆ ಇರಲಿ....

    ಓದಿ ಅಳಬೇಕೋ ನಗಬೇಕೋ ತಿಳಿಯಲಿಲ್ಲ...ಮಲ್ಲಣ್ಣನ ಫಜೀತಿ ಚೆನ್ನಾಗಿತ್ತು...

    ReplyDelete
  58. ಅಶೋಕ್,
    ಒಮ್ಮೆ ನಕ್ಕು ಬಿಡಿ, ಅಳುವುದ್ಯಾಕೆ?
    ಧನ್ಯವಾದಗಳು.

    ReplyDelete