Tuesday, August 10, 2010

"ಗುಟ್ಟು"

ನಲ್ಲೆ,
ನಿನಗೆ ಯಾಕೇ
ಬೇಕು
ಚಂದದ
ಆಭರಣ
                  ಒಡವೆಗಳು...........?

ನಿನ್ನಲ್ಲೇ 
ಇವೆಯಲ್ಲಾ 
ಮುಖದ 
ತುಂಬಾ
ಅಂದದ 

                  ಮೊಡವೆಗಳು........!



ಗೆಳೆಯರೇ,
ಬಹಳ ದಿನಗಳ ಆಸೆಯಂತೆ ನಾನು ಮನೆಗೆ ಹೊರಟಿದ್ದೇನೆ. ಪೂರ್ಣ ಒಂದು ತಿಂಗಳ ರಜೆ ಹಾಕಿ ಮನೆಯತ್ತ ಹೆಜ್ಜೆ ಹಾಕಿದ್ದೇನೆ. ಬೆಂಗಳೂರಲ್ಲಿ ಒಂದು ವಾರ ಇದ್ದು ಆಮೇಲೆ ಮನೆಗೆ ಹೋಗುವ ಆಲೋಚನೆ ನನ್ನದು. ಇಂದಿನಿಂದ ಶ್ರಾವಣ ಮಾಸ ಆರಂಭಗೊಂಡು ಸಂತಸದ ಹಬ್ಬದ ವಾತಾವರಣವನ್ನು ತಂದಿದೆ, ಒಂದೊಂದೇ ಹಬ್ಬಗಳು ಸರತಿ ಸಾಲಿನಲ್ಲಿ ನಿಂತಿವೆ. ಹಬ್ಬದಲ್ಲಿ ಮನೆಯಲ್ಲಿದ್ದರೆ ಮನೆಮಂದಿಯೆಲ್ಲಾ ಅದೆಷ್ಟು ಖುಷಿ ಪಡುತ್ತಾರೆ ಅಲ್ವಾ? ಹಬ್ಬದ ದಿನ ನೀವು ನಿಮ್ಮ ಮನೆಗೆ ಹೋಗಿ ಬನ್ನಿ. ಮನೆಯಲ್ಲಿ ಹಬ್ಬದ ಸಂತೋಷವನ್ನು ಹೆಚ್ಚಿಸಿ.

ನಮಗೆಲ್ಲಾ ತಿಳಿದಿರುವಂತೆ ಅಗಸ್ಟ್ 22ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಅಜಾದ್ ಸರ್ ಅವರ "ಜಲನಯನ" ಮತ್ತು ಶಿವು ಸರ್ ಅವರ "ಗುಬ್ಬಿ ಎಂಜಲು" ಪುಸ್ತಕಗಳ ಬಿಡುಗಡೆ ಸಮಾರಂಭ ಇದೆ. ಎಲ್ಲರೂ ಬನ್ನಿ, ಒಟ್ಟಿಗೆ ಸೇರಿ ನಮ್ಮ ಗೆಳೆಯರನ್ನು ಹಾರೈಸೋಣ, ಎಲ್ಲರೂ ಒಂದಾಗಿ ಈ ಸಮಾರಂಭದ ಅಂದ ಹೆಚ್ಚಲು ಕಾರಣರಾಗೋಣ.
ಪ್ರೀತಿ ಇರಲಿ,
ಪ್ರವೀಣ್ ಆರ್ ಗೌಡ 
ಫೋನ್: 09873837353
            09582199937
                      08880348815(ಬೆಂಗಳೂರಿನಲ್ಲಿ ಇರುವಾಗ)

Wednesday, August 4, 2010

ಹೇಳುವೆಯಾ ಕಾರಣಾ.............

ಪ್ರೀತಿಯೇ ನೀನೇಕೆ ಹೀಗೆ?
ಒಂದೂ ಅರಿಯದ ಭಾವದ ಹಾಗೆ...........
ಮುಡಿದ ಹೂ ಬಾಡಿದ ಮೇಲೆ
ಕಸವಾಗಿ ಹೋಯಿತು ಅದಕ್ಕೆಲ್ಲಿ ಬೆಲೆ..........?

 ಅಂದು ನಿನ್ನ ಕಂಡಾಗ ನನಗಾದ ಪರಿಣಾಮ
 ನಿದೆರೆ ಹಸಿವು ಮರೆತ ನಿನ್ನ ಗುಲಾಮ............
 ನೀನೇ ಉಸಿರು, ನೀನೇ ನನ್ನ ಪ್ರಾಣ
ಎಂದುಕೊಂಡು ಮನ ಕಟ್ಟಿತ್ತು ತೋರಣ.............

ಇಂದೇಕೆ ಬೇಡ ನಾ ನಿನಗೆ
ಗೆದ್ದಿತೆ ಆಸೆ ಲೋಭವು ಕೊನೆಗೆ............
 ಇದರ ಕಾರಣ ತಿಳಿಯುವುದೇ ಅನುಮಾನ
ಒಳಗೂ ಹೊರಗೂ ಬರೀ ಮೌನ......

ಮುಳ್ಳಿನ ನಡುವೆ ಹೂ ನಗುವಂತೆ
ನೋವಲ್ಲೂ ನಗುವ ಈ ಮುಖವಾಡದಂತೆ........
ನಾಟಕವಾಡಿದೆ ಬದುಕ ರಂಗದಲಿ
ಕಳೆದುಹೋದ ಪ್ರೀತಿಯ ನೆನಪಿನಲ್ಲಿ...........

ಈ ಪ್ರೀತಿ ನನ್ನ ಸಾಯಿಸಲಿಲ್ಲ
ನೆಮ್ಮದಿಯಲಿ ಬದುಕಲೂ ಬಿಡಲಿಲ್ಲ........
ಆದರೂ ಜೀವಿಸಿದೆ ಜೀವನಕಾಗಿ
ಕಾಣದ ಪ್ರೀತಿಯ ಭರವಸೆಗಾಗಿ...........