Wednesday, August 4, 2010

ಹೇಳುವೆಯಾ ಕಾರಣಾ.............

ಪ್ರೀತಿಯೇ ನೀನೇಕೆ ಹೀಗೆ?
ಒಂದೂ ಅರಿಯದ ಭಾವದ ಹಾಗೆ...........
ಮುಡಿದ ಹೂ ಬಾಡಿದ ಮೇಲೆ
ಕಸವಾಗಿ ಹೋಯಿತು ಅದಕ್ಕೆಲ್ಲಿ ಬೆಲೆ..........?

 ಅಂದು ನಿನ್ನ ಕಂಡಾಗ ನನಗಾದ ಪರಿಣಾಮ
 ನಿದೆರೆ ಹಸಿವು ಮರೆತ ನಿನ್ನ ಗುಲಾಮ............
 ನೀನೇ ಉಸಿರು, ನೀನೇ ನನ್ನ ಪ್ರಾಣ
ಎಂದುಕೊಂಡು ಮನ ಕಟ್ಟಿತ್ತು ತೋರಣ.............

ಇಂದೇಕೆ ಬೇಡ ನಾ ನಿನಗೆ
ಗೆದ್ದಿತೆ ಆಸೆ ಲೋಭವು ಕೊನೆಗೆ............
 ಇದರ ಕಾರಣ ತಿಳಿಯುವುದೇ ಅನುಮಾನ
ಒಳಗೂ ಹೊರಗೂ ಬರೀ ಮೌನ......

ಮುಳ್ಳಿನ ನಡುವೆ ಹೂ ನಗುವಂತೆ
ನೋವಲ್ಲೂ ನಗುವ ಈ ಮುಖವಾಡದಂತೆ........
ನಾಟಕವಾಡಿದೆ ಬದುಕ ರಂಗದಲಿ
ಕಳೆದುಹೋದ ಪ್ರೀತಿಯ ನೆನಪಿನಲ್ಲಿ...........

ಈ ಪ್ರೀತಿ ನನ್ನ ಸಾಯಿಸಲಿಲ್ಲ
ನೆಮ್ಮದಿಯಲಿ ಬದುಕಲೂ ಬಿಡಲಿಲ್ಲ........
ಆದರೂ ಜೀವಿಸಿದೆ ಜೀವನಕಾಗಿ
ಕಾಣದ ಪ್ರೀತಿಯ ಭರವಸೆಗಾಗಿ...........


49 comments:

  1. ಇನ್ನು ನೋವಿನಲ್ಲಿ ಇದೀರಾ, ಹೊರಗೆ ಬನ್ನಿ, nothing to worry, enjoy life

    ReplyDelete
  2. ಪ್ರವೀಣ,
    ಪ್ರೀತಿಯಲ್ಲಿ ಸಿಲುಕಿ ಒದ್ದಾಡುತ್ತಿರುವಿರಲ್ಲ. ಯಾಕೆ ಪ್ರೀತಿಸಬೇಕಾಗಿತ್ತು? ಇರಲಿ, ನಿಮ್ಮ ಪ್ರೀತಿಯು ಒಂದು ಚೆಲುವಾದ ಕವನಕ್ಕೆ ಜನ್ಮ ಕೊಟ್ಟಿದೆಯಲ್ಲ. ಆ ಪ್ರೀತಿಗೆ thanks!

    ReplyDelete
  3. Kavana Super Agide... Niv dellinalli Idkondu kavana baritira andre Great.Nimminda innu Hecchu Kavana moodibarali..Thanking You..
    Manjunath Begar.

    ReplyDelete
  4. ಕವನ ಪ್ರೀತಿಯ ಲೌಕಿಕ ವ್ಯಾಪಾರದ ಬಗ್ಗೆ ಬರೆದಂತಿದೆ.
    ನಿಮ್ಮ ಜೀವನ ಪ್ರೀತಿಯ ಬಗ್ಗೆ ಬರೆಯಿರಿ. ಓದುಗರಾಗಿ ನಮಗೂ ಖುಷಿ ಸಿಗಲಿ..ಏನಂತೀರಾ?

    ReplyDelete
  5. ಪ್ರವೀಣ್ ಇದು ವಿಫಲ ಪ್ರೇಮವೇ ಅಥವಾ ವ್ಯಕ್ತ ಪಡಿಸಲಾಗದ ಪ್ರೇಮವೇ..? ಆದ್ರೆ ಮನದ ವ್ಯಾಕುಲತೆ ಅರ್ಥ ಮತ್ತು ಕಳೆದ ನೆನಪುಗಳು ಮನದಲ್ಲಿ ಮೂಡಿಸುವ ಹುಯ್ದಾಟ ಚನ್ನಾಗಿ ಮೂಡಿದೆ.

    ReplyDelete
  6. ಪ್ರೀತಿಯ ನಿರಾಸೆ ಒಳ್ಳೆಯ ಕವನ ಹೊರತರುವಲ್ಲಿ ಫಲಿಸಿದೆ.

    ReplyDelete
  7. ಪ್ರೀತಿಯೇ ಹಾಗೇ ಮನಸ್ಸಿಗೆ ಹೇಳಲಾರದ ಭಾವನೆಗಳನ್ನೂ, ಸ೦ತಸವನ್ನೂ ಹಾಗೆಯೇ ಅಗಲುವಿಕೆಯ ನೋವನ್ನೂ ನೀಡುತ್ತದೆ. ಸ೦ತೈಸಿಕೊಳ್ಳಿ. ನಮ್ಮನ್ನು ಪ್ರೀತಿಸದಿದ್ದವರ್ರೊ೦ದಿಗೆ ನಮ್ಮ ಸು೦ದರ ಸನ್ನಿವೇಶಗಳನ್ನು ಹ೦ಚಿಕೊಳ್ಳುವುದಕ್ಕಿ೦ತ ನಮ್ಮನ್ನು ಪ್ರೀತಿಸುವವರೊ೦ದಿಗೆ ನಮ್ಮ ನೋವನ್ನೇಲ್ಲಾ ಬಿಚ್ಚಿಡುವುದು ಒಳಿತು.
    ಅಶ್ವಥ್ ಹಾಡಿದ“ ಹೇಳಿಹೋಗು ಕಾರಣ“ ಭಾವಗೀತೆಯ ನೆನಪಾಯ್ತು. ಸು೦ದರವಾಗಿದೆ. ನಿಜವಾಗಿ ಹೇಳಬೇಕೆ೦ದರೆ ಈ ಕಾವ್ಯವಸ್ತು ಇ೦ದು ಬೆಳಗ್ಗಿನಿ೦ದ ನನ್ನ ತಲೆತಿನ್ನುತ್ತಿತ್ತು!ಅದನ್ನು ಅಕ್ಷರರೂಪಕ್ಕೆ ಸು೦ದರವಾಗಿ ಇಳಿಸಿದ್ದೀರಿ.
    ನಮಸ್ಕಾರಗಳೊ೦ದಿಗೆ,

    ReplyDelete
  8. ಚೆನ್ನಾಗಿದೆ ಸರ್ ಕವನ.... ಮನದಾಳದಿಂದ ಬಂದಂತಿದೆ..

    ReplyDelete
  9. ಇದು ಕೇವಲ ಕವನವೋ ಅಥ್ವಾ ಜೀವನದ ಘಟನೆಯೋ ತಿಳಿಯಲಿಲ್ಲ, ಜೀವನದ ಘಟನೆಯಾದರೆ ಪರಾಂಜಪೆಯವರು ಹೇಳಿದ್ದು ಸರಿ, ಬರೇ ಕವನವಾದರೆ ನಿಮ್ಮ ಕಲ್ಪನೆ ಚೆನ್ನಾಗಿದೆ, ಒಂದು ಮಾತು ನೆನಪಿಡಿ ಈ ಜೀವನದ ಯಾವುದೂ ಶಾಶ್ವತವಲ್ಲ, ನಿಮಗೆ ಅಮ್ಮ ಕೊಡುವ ಪ್ರೀತಿಯನ್ನು ನಿಮ್ಮ ಪ್ರೇಯಸಿ ಕೊಡುವುದಿಲ್ಲ, ಇವತ್ತಿನ ಜಗದ ಪ್ರೇಮ-ಪ್ರೀತಿ ಎಲ್ಲಾ, ಜೇಬಲ್ಲಿ ಝಣ ಝಣ, ಮೊಬೈಲಲ್ಲಿ ಬ್ಯಾಲೆನ್ಸ್ , ಬಂಗಲೆ, ಬ್ಯಾಂಕ್ ಖಾತೆಯಲ್ಲಿ ಒಂದಷ್ಟು, ಬಳಸಲು ೫ ಲಕ್ಷದ ಕಾರು ಇವೆಲ್ಲಾ ಇರುವವರೆಗೆ ಮಾತ್ರ ! ಅದರ ಹೊರತೂ ನಿಮಗೆ ನಿಮ್ಮ ಹೃದಯದ ಅನಿಸಿಕೆಯನ್ನು ನಿಜವಾಗಿಯೂ ನೋಡಿ ಪ್ರೀತಿ ಹರಿಸುವವಳು ತಾಯಿ ಮಾತ್ರ, ನೀವು ತೊಳಲಾಟದಲ್ಲಿದ್ದರೆ ನಿಮಗೆ ಬೆಳಕು ಹರಿಸುವುದು ಧ್ಯಾನ ಮಾತ್ರ, ಅದನ್ನು ಗುರುವನ್ನು ಕಂಡು ಮಾಡಿ ! ನಿಮಗೆ ಜಯವಾಗಲಿ

    ReplyDelete
  10. ಭಾವನೆಗಳನ್ನು ಚೆನ್ನಾಗಿ ಪ್ರಕಟಿಸಿದ್ದೀರಿ.ಸು೦ದರವಾಗಿದೆ.

    ReplyDelete
  11. ಹೇಳಿ ಹೋಗು ಕಾರಣ ನೆನಪಾಯ್ತು !. ಎಂತಹ ಭಾವ ತುಂಬಿದ ಕವನ ನಿಮ್ಮದು.ತುಂಬ ಚೆನ್ನಾಗಿದೆ

    ReplyDelete
  12. ಚೆನ್ನಾಗಿದೆ..ಕಲ್ಪನೆ ಚೆನ್ನಾಗಿದೆ
    ನಮಸ್ಕಾರ

    ReplyDelete
  13. ಪ್ರವೀಣ್ ಸರ್,

    ನಿಮ್ಮ ಮನಸ್ಸಿನ ಭಾವನೆಗಳು ಕವನದಲ್ಲಿ ಚೆನ್ನಾಗಿ ವ್ಯಕ್ತವಾಗಿವೆ.

    ReplyDelete
  14. ಪ್ರವೀಣ್...

    ಚಂದದ ಕವನಕ್ಕೆ ಅಭಿನಂದನೆಗಳು..

    ಇಂದು ನಿಮ್ಮ ಜನುಮದಿನ..
    ಸದಾ.. ಸಂತೋಷದಿಂದ... ನಗುನಗುತ್ತಾ ಇರಿ..
    ಶುಭಾಶಯಗಳು..

    ReplyDelete
  15. ಪರಾಂಜಪೆ ಸರ್,
    ಇದು ನೋವಲ್ಲ, ಒಂದು ರೀತಿಯ ಸುಖ! ಯಾಕೋ ತುಂಬಾ ನೆನಪಾಗಿ ಈ ಕವನದ ಹುಟ್ಟಿಗೆ ಕಾರಣ ಆಯ್ತು. ಧನ್ಯವಾದಗಳು.

    ReplyDelete
  16. ಕವನದ ಸಾಲುಗಳಲ್ಲಿ ದುಖವೇ ಮಡುಗಟ್ಟಿದೆ, ಚೆನ್ನಾಗಿದೆ

    ReplyDelete
  17. ಸುನಾಥ್ ಸರ್,
    ಏನು ಮಾಡೋದು ಹೇಳಿ,
    ಸಿಕ್ಕಿಹಾಕಿಕೊಂಡು ತಪ್ಪಿಸಿಕೊಳ್ಳಲಾಗದೆ ಒದ್ದಾಡಿ ಎಡವಿ ಬಿದ್ದು ಸುಧಾರಿಸಿಕೊಂಡು ಬದುಕುತ್ತಿದ್ದೇನೆ.
    ಧನ್ಯವಾದಗಳು ಪ್ರತಿಕ್ರಿಯೆಗೆ.

    ReplyDelete
  18. ಮಂಜುನಾಥ್ ಅವರೆ,
    ಧನ್ಯವಾದಗಳು ನಿಮ್ಮ ಬೇಟಿಗೆ ಮತ್ತು ಪ್ರತಿಕ್ರಿಯೆಗೆ. ನಿಮ್ಮೆಲ್ಲರ ಪ್ರೊತ್ಸಾಹವೇ ನನಗೆ ಪ್ರೇರಣೆ.

    ReplyDelete
  19. ದಿವ್ಯಪ್ರಕಾಶ್,
    ಏನು ಮಾಡೊದು ಹೇಳಿ, ಜೀವನವೇ ಲೌಖಿಕ ವ್ಯಾಪಾರ. ಅಲ್ಲಿ ಪ್ರೀತಿ, ದುಃಖ, ಸುಖ, ಕಷ್ಟ ಎಲ್ಲವೂ ಇರತ್ತಲ್ವಾ?
    ಧನ್ಯವಾದಗಳು.

    ReplyDelete
  20. ಅಜಾದ್ ಸರ್,
    ಇದು ವ್ಯಕ್ತಪಡಿಸಿದ ವಿಫಲ ಪ್ರೆಮ.......!
    ನೆನಪುಗಳಿಗೆ ಸಾವುಂಟೇ? ಕಾಡುತ್ತಲೇ ಇರುತ್ತವೆ.
    ನಿಮ್ಮ ಪ್ರೊತ್ಸಾಹ, ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  21. ಡಾಕ್ಟರ್ ಸರ್,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,

    ReplyDelete
  22. ಕೆ ಎಸ್ ರಾಘವೆಂದ್ರ ನಾವಡರೆ,
    ನಿಮ್ಮ ಮಾತು ನೂರಕ್ಕೆ ನೂರು ನಿಜ,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  23. ಭಾವನೆಗಳು ಮನದಾಳದಿಂದ ಉಕ್ಕಿದಂತಿದೆ . . . .
    "ಬಾಳ ಕದನದಲ್ಲಿ ಭರವಸೆಗಳು ಬೇಕು , ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು" ನೆನಪಿದೆಯಲ್ಲ 'ಆಕಸ್ಮಿಕ' ಹಾಡು.

    ReplyDelete
  24. ಪ್ರಗತಿಯವರೆ,
    ಹೌದು,
    ಕಾಡಿದ ನೆನಪುಗಳು ಕವನವಾಗಿ ಮನದಾಳದಿಂದ ಬಂದಿದೆ.
    ಧನ್ಯವಾದಗಳು.........

    ReplyDelete
  25. kavana chennagide.... yochane bidi munde saagi...

    ReplyDelete
  26. ನೋವು ತುಂಬಿರೋ ಪ್ರೀತಿ ಕವನ ,,,,,,,,,,,

    cheer up ......

    ReplyDelete
  27. ಸಾಲುಗಳು ಚೆನ್ನಾಗಿವೆ..
    ನಿಮ್ಮ ಥೀಮ್ ನಿಂದ ಓದೋದು ಸ್ವಲ್ಪ ಕಷ್ಟವಾಯ್ತು..

    ReplyDelete
  28. ಪ್ರವೀಣ!!
    ಕವನ ಕೂಡ ಬರೀತೀರಾ??
    ಚೆನ್ನಾಗಿದೆ. will read all your updated blog slowly.
    take care
    :-)
    ಮಾಲತಿ ಎಸ್.

    ReplyDelete
  29. ವಿ ಆರ್ ಭಟ್ ಸರ್,
    ಇದು ನಿಜ ಜೀವನದ ಕವನ, ಅಂತಹ ಒಂದು ತೊಳಲಾಟ ಇದ್ದ ಸಂದರ್ಭದಲ್ಲಿ ನಾನೊಬ್ಬ ಮನುಷ್ಯನಾಗಿದ್ದೇ ಧ್ಯಾನದಿಂದ.
    ನಿಮ್ಮ ಪ್ರತಿಕ್ರಿಯೆಗೆ ಮತ್ತು ಮಾಹಿತಿಗೆ ಧನ್ಯವಾದಗಳು.

    ReplyDelete
  30. ಕುಸುಮು ಸರ್, ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

    ReplyDelete
  31. ಸುಬ್ರಮಣ್ಯ ಸರ್,
    ಧನ್ಯವಾದಗಳು,

    ReplyDelete
  32. ವಿಜಯಶ್ರಿ ಮೇಡಮ್, ಧನ್ಯವಾದಗಳು.

    ReplyDelete
  33. ಶಿವು ಸರ್,
    ಮನಸ್ಸಿನ ಭಾವನೆಗಳಿಗೆ ಕಡಿವಾಣಗಳೆಲ್ಲಿ?
    ಧನ್ಯವಾದಗಳು.

    ReplyDelete
  34. ಪ್ರಕಾಶಣ್ಣ,
    ನಿಮ್ಮ ಶುಭಾಶ್ಃಅಯಗಳಿಗೆ, ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

    ReplyDelete
  35. ಸಾಗರಿ,
    ಎನು ಮಾಡೊದು ಹೆಳಿ, ದುಖದ ಮನಸ್ಸಿಗೆ ನೆನಪಾಗಿದ್ದೆ ಇದು.
    ಧನ್ಯವಾದಗಳು.

    ReplyDelete
  36. ನಾಗರಾಜ್ ಅವರೆ,
    ಖಂಡಿತಾ ನೆನಪಿದೆ. ಅ ಭರವಸೆಯೇ ಜೀವಾಳವಾಗಿ ಬದುಕು ನಡೆಸುತ್ತಿರುವೆ.
    ಧನ್ಯವಾದಗಳು.

    ReplyDelete
  37. ಸುಗುಣ ಮೆಡಮ್,
    ಯೋಚನೆ ಬಿಟ್ಟರೂ ನೆನಪಾಗಿ ಮತ್ತೆ ಕಾಡುತಾಳ ನೊಡಿ!
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ

    ReplyDelete
  38. ಶಿವಪ್ರಕಾಶ್ ಅವರೆ,
    ಅದೆಲ್ಲ ಸರಿಯಾದಂತೆ ಕಂಡರೂ ಎಂದಿಗೂ ಸರಿಯಾಗುವುದಿಲ್ಲ.
    ಧನ್ಯವಾದಗಳು.

    ReplyDelete
  39. ಶೆಟ್ಟರೆ,
    ಧನ್ಯವಾದಗಳು.

    ReplyDelete
  40. ಕತ್ತಲೆ ಮನೆ:-
    ಬರೀ ಓದಿ ಸಾಕು.......:)
    ಧನ್ಯವಾದಗಳು.

    ReplyDelete
  41. ಮಾಲತಿ ಮೆಡಮ್,
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.

    ReplyDelete
  42. ಸೊಗಸಾದ ಕವನ.

    ReplyDelete
  43. ಬೊಗೆದಾಗ ಕೈಯಲ್ಲಿ ಬಂದು ಬೆರಳಸಂದಿನಿಂದ ಜಾರಿದ ನೀರ ಹನಿಯಂತ ಮನದ ವಿಷಣ್ಣತೆಯ ಹಳೆಯ ನೆನಪುಗಳು ಒಮ್ಮೊಮ್ಮೆ ಕಾಡಿದಾಗ ಬರುವ ಕವನಗಳು ಮನವನ್ನ ಹಗುರಾಗಿಸುತ್ತವೆ ಅಲ್ಲವೇ ಮನದಾಳದ ಪ್ರವೀಣರೇ!
    ಚಂದದ ಕವನ
    ದೆಲ್ಹಿಯಲ್ಲಿ ಬಂದು ನನ್ನನ್ನು ಭೇಟಿಯಾಗಿ ತಮ್ಮ ಅಮೂಲ್ಯ ಸಮಯವನ್ನ ನನ್ನ ಜೊತೆ ಕಳೆದದ್ದಕ್ಕೆ ನಾನು ಆಭಾರಿ. ತಮ್ಮ ಈ ಸ್ನೇಹ-ಪ್ರೀತಿ ಸದಾ ಇರಲಿ.

    ReplyDelete
  44. ಸೀತಾರಾಂ ಸರ್,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
    ಅಷ್ಟು ದೂರದಿಂದ ಬಂದ ನಿಮ್ಮನ್ನು ಭೇಟಿ ಮಾಡಿ ಕೇವಲ ಒಂದು ಘಂಟೆ ನಿಮ್ಮೊಂದಿಗೆ ಕಳೆದಿದ್ದಾದರೂ ಸದಾ ನೆನಪಿನಲ್ಲಿ ಉಳಿಯುವಂತಹ ಕ್ಷಣಗಳು ಅವು, ಸಮಯದ ಅಭಾವವಿದ್ದರೂ ನನ್ನೊಂದಿಗೆ ಅಷ್ಟು ಸಮಯ ವಿನಿಯೋಗಿಸಿದ್ದೀರಾ, ನಿಮ್ಮ ಈ ಪ್ರೀತಿಗೆ ನಾನು ಚಿರಋಣಿ........

    ReplyDelete
  45. ಶಶಿ ಅಕ್ಕಾ,
    ಧನ್ಯವಾದಗಳು.......

    ReplyDelete
  46. ಪ್ರವೀಣ್ ಸರ್....

    ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆ ಇರಲಿ...ನಿಮ್ಮ ಕವನ ನಂಗೆ ತುಂಬಾನೇ ಹಿಡಿಸಿತು... ಪ್ರೀತಿಯ ವರ್ಣನೆ ತುಂಬಾ ಚೆನಾಗಿ ಮೂಡಿ ಬಂದಿದೆ...ತುಂಬಾ ಚೆನ್ನಾಗಿದೆ,,,,ಧನ್ಯವಾದಗಳು....

    ReplyDelete